ನಾ ಕಟ್ಟಿಕೊಂಡ ಒಲವಿಗೆ ಸಾವೇಇಲ್ಲ ಬದುಕಲು ಮತ್ತೆ,ಮತ್ತೆ.......
ಸುಡುಗಾಡ ಬೂದಿಯದು ಸುಳಿಯುತ್ತಿದೆ ಬೇಡವೆಂದರೂ ಸುಳಿಯಂತೆ,
ಮರುಭೂಮಿಯಿದು ಮರು-ಭೂಮಿಯಾಗುವ ಕನಸಿಗೆ ನೀ ಮಳೆಯಂತೆ.
ಆಕಾಶದಗಲಕ್ಕು ಅವಕಾಶಗಳಿವೆ ಎಲ್ಲಾದರು ಇಳಿದುಬಿಡು ಮಂತ್ರಜಲವೇ,
ಅಲ್ಪಯುವಾಗಲೋಲ್ಲದ ಅನುರಾಗಿಯ ಕೊರಗಲ್ಲವಿದು, ಆಮಂತ್ರಣ ಒಲವೆ.
ಬಾ ... ಬಂದಾದ ಮೇಲೆ ಮರೆತು ಬಿಡು ನೀ ಹಿಂದಿರುಗುವ ದಾರಿಯ
ಬಯಕೆಯಲ್ಲ ಭಯವಿದು, ಕರುಣೆತೋರಿ ಕರುಣಿಸದಿರಲೆಂದು ಈ ಪರಿಯ
No comments:
Post a Comment