Wednesday, June 27, 2012

ನಿನ್ನ ಬರುವಿಕೆಗಾಗಿ ಕಾದಿರುವ ಹಾಗು ಕಾಯುತ್ತಿರುವ ಬದುಕು

ಎಂದಿಗೂ ನಿನ್ನ ಕೈ ಸೇರಿ ನಲಿಯದ, ನಲಿದರು ಬಾಯಿತುಂಬಿ ಉಲಿಯದ, ಉಲಿದರು ನನ್ನ ಅರ್ಥಯಿಸುವಲ್ಲಿ ಫಲಿಸದ, ಫಲಿಸಿದರು ಕೂಡಲೇ ನನ್ನೆಡೆಗೆ ಒಲಿಸದ, ಒಲಿಸಿದರು ಒಂದಾಗಿ ಬಾಳಲು ಕಲಿಸದ. ಇಂತ ನೂರಾರು ಬರಹಗಳ ಬರೆಯುವುದು ಅರ್ಥಹೀನ ಎಂದು ಬಲ್ಲೆ. ಆದರೇನು ಮಾಡಲಿ ಒಲವೆ ನಿನ್ನ ಅಪರಿಚಿತತೆ ನನ್ನ ಮೌನವಾಗಿಸಿದೆ, ಅಸ್ಪಷ್ಟತೆ ಅನುಮಾನಿಸುಸುತ್ತಿದೆ, ಅಗತ್ಯತೆ ಅನಿವಾರ್ಯವಾಗುತ್ತಿದೆ. ಇದೆಲ್ಲವ ಮಾರೆಮಾಚಿ ಮನಸ ಸಮಾಧಾನಿಸಲೆಂದೇ ಬರಹ. ಎಲ್ಲಿಯೋ ಹುಟ್ಟಿ  ಯಾರದೋ ಕಣ್ಗಾವಲಿನಲ್ಲಿ ಬೆಳೆಯುತ್ತಾ, ಮುಂದೆಂದೋ ಎದುರಾಗಲಿರುವ ನನ್ನ ಏಕೈಕ ನಿರೀಕ್ಷೆಯಲ್ಲಿ ಬದುಕಿಗೊಂದು ಆರಂಭವನ್ನೇ  ನೀಡದೆ ನಿಂತಿರುವ ನಿನ್ನನ್ನ ಅಪರಿಚಿತವಾಗಿಯೇ ಪರಿ ಅಚ್ಚಿಕೊಂಡಿರುವವನು ಇನ್ನು ಬದುಕು ಬಳಿ ಕರೆದಾಗ ಬಿಟ್ಟು  ಬಿಡುತ್ತೆನಾ ?

Saturday, June 9, 2012

ಕರದಲ್ಲಿ ಹಿಡಿದ ಕಪ್ಪು ವಜ್ರದ ಸೆಳೆತಕ್ಕೆ ಬೆರಗಾಗದವರೆರೋ ಬಸವ


ಕೊರಳಲಿ  ಧರಿಸಿದ ಲಿಂಗವ ಕರದಲಿ ಹಿಡಿದು  ಕುಳಿತಾಗ  ಕಣ್ಣ ಮುಂದೆ ದಿಟ್ಟಿಸಿ,

ಹಣೆಯಲಿ ಪ್ರತಿಸ್ಥಾಪವಾದ ಬಿಂಬವದು ಕಣ ಕಣಗಳಲ್ಲೂ  ಉನ್ಮಾದವ ಹುಟ್ಟಿಸಿ,

ಮನದಲೊಂದೆ ಧ್ಯಾನ, ಮರೆಯಲಾಗದ  ಜ್ಞಾನ ಬಂದಂತಾಯಿತು  ಶಿವನ ಮುಟ್ಟಿಸಿ