Thursday, September 18, 2014

ಮ(ಹಾ)ನದಿ ತಳಮಳ


ಕಾಡುವ ಹುಡುಗಿಗೆ ಕಾದಿದೆ ಮನ, ಕಾಡುವ ಹುಡುಗಿಗೆ ಕಾದಿದೆ ಮನ, ಮನ.......  
ಕಾಡುವ ಹುಡುಗಿಗೆ ಕಾದಿದೆ ಮನ,ಕಾಡುವ ಹುಡುಗಿಗೆ ಕಾದಿದೆ ಮನ.
ನೋಡಬಲ್ಲನೆ ಒಂದು ದಿನ, ಅವಳೊಂದಿಗೆ ನಡೆಯಬಲ್ಲನೆ ಅನುಕ್ಷಣ //
ಕಾಡುವ ಹುಡುಗಿಗೆ ಕಾದಿದೆ ಮನ.......
ಕಾದು ಕುಳಿತ ಮನದ ತಳಮಳ ಎದೆಯೋಳಗಿಂದು ಹಾಡುತಿದೆ,//
ಕನಸ ಕಾಣದ ಕಣ್ಣುಗಳೊಳಗೆ ಅವಳನೇ ಬಿಂಬಿಸೋ ಹಠವಿದೆ 
ಎದುರಾಗುವಳೋ ಅವಳು ಎದೆ ಸೇರುವಳೋ ಅವಳು 
ಎಲ್ಲಿ ಹುಡುಕಲಿ  ಅವಳ ನಾ , ಅವಳಲಿ...  ಹೇಗೆ ತಿಳಿಸಲಿ ಒಲವನ! (ಕಾಡುವ ಹುಡುಗಿಗೆ )

ಸಾವಿರ ಮನಗಳು ಸನಿಹವಿದ್ದರು ಅವಳದೇ ಚಿಂತೆ ಕಾಡುತಿದೆ //
ಕಾಣದ ಊರಲಿ ಕಾಡುತ ಹೀಗೆ ಕುಳಿತವಳು ಅವಳಂತೆ 
ಅಸ್ಪಷ್ಟತೆ...,ಅಪರಿಚಿತತೆ..., 
ಕೂಗಿ ಕರೆದಿದೆ ನನ್ನ ಎದೆ  , ಹಾಗೆ ನೀ ತಿರುಗಿ ಹೋದೆಯ ಗುರುತಿಸದೆ..  (ಕಾಡುವ ಹುಡುಗಿಗೆ)

ಹಗಲು ಬೆಳಕಿನಲ್ಲಿ ಹೊಳೆಯಲೊರಟಿರುವ ಮಿಂಚುಹುಳುವು ನಾನು 
ಒಮ್ಮೆಯಾದರು, ಒಮ್ಮೆಯಾದರು, ಒಮ್ಮೆಯಾದರು   ನಿನ್ನ ಮುಂದೆ ಹೊಳೆಯ ಬಲ್ಲನೆನು  
ಹಗಲು ಬೆಳಕಿನಲ್ಲಿ ಹೊಳೆಯಲೊರಟಿರುವ ಮಿಂಚುಹುಳುವು ನಾನು 
ಒಮ್ಮೆಯಾದರು ಬಣ್ಣದ ಬೆಳಕಲಿ ಸೆಳೆಯಬಲ್ಲನೆನು, ಸೆಳೆಯಬಹುದೇ ನಾನು  ಅವಳ ಬದುಕಿನಲಿ ಉಳಿಯಬಹುದೇ ನಾನು,  ಉಳಿಯಬಹುದೇ ನಾನು,   ಉಳಿಯಬಹುದೇ ನಾನು.

ಜಿ. ಎಸ್. ಶಿವರುದ್ರಪ್ಪರವರ  "ಕಾಣದ ಕಡಲಿಗೆ ಹಂಬಲಿಸಿದೆ ಮನ"  ಭಾವಗೀತೆಯು ಸಿ ಅಶ್ವಥ್ ರವರ  ದ್ವನಿಯಲ್ಲಿ  ಬಹಳ  ಕಾಡಿತು, ಪರಿಣಾಮ  ಈ ಸಾಹಿತ್ಯ. ಬೇಸರಿಸದೆ ಓದಿಕೊಳ್ಳಿ (ಸಿ ಅಶ್ವತ್ ರವರ ರಾಗ ಸಂಯೋಜನೆಯೊಂದಿಗೆ ಗುನುಗಿ ಕೊಂಡರೆ ಸ್ವಲ್ಪ ಹಿಡಿಸಬಹುಬಹುದು )