Friday, April 24, 2015

ಅಮಾಯಕ ಶಾಲಾ ಬಾಲಕಿಯೊಬ್ಬರು ಬರೆದಿದ್ದ ನೂರಾರು ಪ್ರೇಮ ಬರಹಗಳಿಗೆ ಬರೆದ ಮುನ್ನುಡಿ


ಗುರುವಾಗಲ್ಲದಿದ್ದರು ಗೆಳೆಯನಾಗಿ, ಹಿರಿಯನಾಗಿ, ಹೀತೈಷಿಯಾಗಿ ಹೇಳುವುದಿಷ್ಟೇ ..... ನಿಮ್ಮ ಒಳಗಿರುವ ಒಲವಿನೆಡೆಗಿನ ಅವಸರದ ಅತೀವ ಆಸಕ್ತಿ, ಅನಾನುಭವಿ ಮನಸ್ಥಿತಿ  ಅನಿವಾರ್ಯವಲ್ಲದಿದ್ದರೂ ತಂದುಕೊಳ್ಳಲಿರುವ ಪರಿಸ್ಥಿತಿ ,  ಹಾಗು ಅರ್ಥವೇ  ಆಗದೇ  ಆಕರ್ಷಣೆಗೆ ಹುಟ್ಟುಕೊಳ್ಳುತ್ತಿರುವ  ಹುಸಿ ಪ್ರೀತಿ. ಇವೆವುಗಳು ನಿಮ್ಮ ಭಾಳ ಮೈತ್ರಿಯ  ಕಟ್ಟಿಕೊಡುವುದಿಲ್ಲ.
ಇಷ್ಟಕ್ಕೂ ನೈಜ ಪ್ರೀತಿಯೆಂಬುದು  ಮೊದಲಿಗೆ ನಿಮ್ಮ ಮೇಲೆಯೆ ಹುಟ್ಟಿಕೊಳ್ಳುವಂತದ್ದು. ಬಲಹೀನತೆಗಳ  ಮೆಟ್ಟಿ ನಿಲ್ಲುವಂತದ್ದು, ಬದುಕಿನ ಸಾಮರ್ಥ್ಯವ  ಗಟ್ಟಿಗೊಳಿಸುವಂತದ್ದು..... ಇಲ್ಲಿ ನಿಮ್ಮ ಮೇಲೆ ಅಂದರೆ ನೀವಲ್ಲ, ನಿಮ್ಮ ಹಿತವಲ್ಲ, ನಿಮ್ಮ ಬದುಕಷ್ಟೇ ಅಲ್ಲ.! ಅದು ತಂದೆಯ ನಿರೀಕ್ಷೆ, ತಾಯಿಯ ನಂಬಿಕೆ, ಸಹೋದರಿಯ ಕಾಳಜಿ, ಸಹೋದರನ ಜವಾಬ್ದಾರಿ, ಹಿತ ಬಯಸುವವರ ನಿಷ್ಪಲ ಮನ, ನೆರೆಹೊರೆಯವರ ಜತನ, ಮತ್ತು ಸಮಾಜದ ಋಣ.ಇವೆಲ್ಲವನ್ನೂ  ಒಂದು ಚೌಕಟ್ಟಿನೊಳಗೆ ತಂದ  ನಂತರವಷ್ಟೇ ನಿಮ್ಮ ಪ್ರಭುದ್ದ  ಮನದೊಳಗೆ,   ಮನೆತನಗಳ  ಗೌರವವನ್ನು ಹಿಮ್ಮಡಿಗೊಳಿಸುವಂತಹ, ಎಲ್ಲರ  ಖುಷಿಯನ್ನು ಪಡಿಮೂಡಿಸುವಂತ, ನಿಮ್ಮ ಮನಸನ್ನು  ಉಣಬಡಿಸುವಂತ  ಹೆಮ್ಮೆಯ ಒಲವೊಂದು ಅಡಿಹಿಡಲು ಸಾದ್ಯ.

No comments:

Post a Comment